ನವಂಬರ್ ೧೮(ಈ ವಾರ) ರಂದು ‘ಬದ್ಮಾಶ್’ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಾದ ರವಿ ಕಶ್ಯಪ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ‘ಬದ್ಮಾಶ್’ ಚಿತ್ರವನ್ನು ಯುವ ನಿರ್ದೇಶಕ ಆಕಾಶ್ ಶ್ರೀವತ್ಸ ಕಥೆ ಚಿತ್ರೆಕತೆ ಬರೆದು ನಿರ್ದೇಶಿಸಿದ್ದಾರೆ.
ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನದ ಹಾಡುಗಳಿಗೆ ವಿಜಯ್ ಪ್ರಕಾಶ್, ಶ್ರೇಯ ಘೋಷಾಲ್, ಟಿಪ್ಪು ಮತ್ತು ರಘು ದೀಕ್ಷಿತ್ ಧ್ವನಿ ನೀಡಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಆಕಾಶ್ ಶ್ರೀವತ್ಸರವರ ಗೀತರಚನೆ ಮಾಡಿದ್ದಾರೆ.
ಧನಂಜಯ, ಸಂಚಿತಾ ಶೆಟ್ಟಿ, ಅಚ್ಯುತ್ ಕುಮಾರ್, ರಮೇಶ್ ಭಟ್, ರಮೇಶ್ ಪಂಡಿತ್, ಪನ್ನಗಾಭರಣ ಮುಂತಾದವರ ತಾರಾಗಣವಿರುವ ‘ಬದ್ಮಾಶ್’ ಚಿತ್ರಕ್ಕೆ ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನ, ಮಾಸ್ ಮಾದ ಮತ್ತು ವಿನೋದ್ ಸಾಹಸ ನಿರ್ದೇಶನ, ರಾಜನ್ ಮತ್ತು ಸತೀಶ್ ಸೌಂಡ್ ಎಫೆಕ್ಟ್, ಮುರಳಿ ಮತ್ತು ಧನು ನೃತ್ಯ ನಿರ್ದೇಶನವಿದೆ.